ಬೃಂದಾವನ

ಗೋಪಿಯರೊಡನಾ ಬೃಂದಾವನದಲಿ
ಲೀಲಾ ನಾಟಕವಾಡಿದ ನಲಿದು
ಬೃಂದಾವನವೇ ಕೃಷ್ಣನ ಬಾಲ್ಯದ
ತವರೂರಾಯಿತು ಜಸವನು ಮೆರೆದು.
ಹಿರಿಯರು ಬಂದರು ಹಿರಿತನ ಮರೆದು
ಎಳೆಯರು ಕುಣಿದರು ಕೃಷ್ಣನ ಕರೆದು
ತರುಣಿಯರೆಲ್ಲರು ಮೋಹವ ತೊರೆದು
ಕೊಳಲಿನ ಕೃಷ್ಣನ ರೂಪವ ನೆನೆದು
ಕೃಷ್ಣನ ಕೊಳಲಿನ ಗಾನವ ಕೇಳ್ದು
ಎಲ್ಲರು ಬರುವರು ಆತುರ ತಳೆದು.

ಜನನ-ಮರಣ ಜಂಜಾಟವ ಗೆಲಿದು
ಆತ್ಮದ ದರ್‍ಶನ ಮಾಡಿದ ತಾಣ
ಕೀಳ್ಮೇಲೆಂಬುದು-ಆಳ್-ಪೆಣ್ ಎಂಬುದು
ಮಾಸಿದ ಪಾವನ ಭೂಮಿ ನಿದಾನ.
ಪಶುಪಾಲನೆಯ ಕೃಷಿಕರ ಮಾನ
ಕೃಷ್ಣನ ಕೊಳಲಿನ ಮಧುರಸ ಪಾನ
ಎಲ್ಲರೊಳೊಂದೇ ನೋಟದ ಮೌನ
ಏನಿದು ಎಲ್ಲೂ ಮೆರೆವನು ಜಾಣ
ಮನಕದ್ದೊಯ್ದನು ಜನವನು ಕಾಣ
ಎಲ್ಲರ ಸೆಳೆಯುವ ಮೋಹನ ಬಾಣ.

ಯಮುನಾ ತೀರದ ಮರಗಳ ಮರೆಯಲಿ
ಬೆಟ್ಟದ ಮೇಗಡ ಸರ್‍ವರ ಒಳಗೆ
ಲಾಸ್ಯದಿ ಮೂಡುವ ತಾಪವನಳೆಯುತ
ಬಿಂಬಿಸುತಿರುವನು ಬರುತಲಿ ಹೊರಗೆ
ಗೋಪಿಯರ ಧ್ವನಿ ಕೇಳಿತು ಧರೆಗೆ
ದೂರವ ಕಾಣದೆ ಬಂದರು ಹೇಗೆ?
ಎಲ್ಲಿದೆ ಧಾವತಿ ಮನವೊಂದಾಗೆ
ಒಂದೇ ಕಾಂಬುದು ನೋಡಲು ಹೊರಗೆ
ಆತ್ಮದ ದರ್ಶನ ಮಾಡುತ ಒಳಗೆ
ಭಕ್ತರು ನಿಂದರು ಕೃಷ್ಣನ ಕರೆಗೆ-

ಬೃಂದಾವನದಲಿ ಸರ್‍ವರು ಸ್ತ್ರೀಯರು
ಕೃಷ್ಣನ ಹೂರತಿನ್ನಾವನು ಪುರುಷ
ಮೀರಾದೇವಿಯ ದರ್‍ಶನದಿಂದಲಿ
ಗೋಸ್ವಾಮಿಯ ಮತಿಯಾದುದು ಸರಸ.
ಗೋಪಿಯರಿಟ್ಟರು ಸತ್ಯದ ಕಳಸ
ಭಕ್ತರನೆಯ್ದಿತು ಪ್ರೇಮದ ಪರುಷ
ಆದುದು ಲೋಕದ ಮನ ಸಂತೋಷ
ಇರುವುದು ಇನ್ನೂ ಕೃಷ್ಣನ ಹಾಸ
ಯಮುನಾ ತೀರದ ಮಾನವ ವೇಷ
ನೋಡದೊ ನಿರುತಂ ರೂಪೋದ್ಭಾಸ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಿರಂಗಾ ಧ್ವಜ
Next post ಮರವಿನ ಮನವೆ!

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys